ಭಾರತ ದೇಶದ ತೊಂಡು ದನಗಳಿಗೆ

ಭಾರತ ದೇಶದ ತೊಂಡು ದನಗಳಿಗೆ
ಕರ್ನಾಟಕವೇ ಪ್ರೀತಿಯು
ಇಲ್ಲಿಯ ಹುಲ್ಲು ನೀರು ಕಂಡರೆ
ಎಲ್ಲಿಲ್ಲದ ಸಂಪ್ರೀತಿಯು
ಆದರೆ ಏಕೊ ಕನ್ನಡ ಎಂದರೆ
ಅವುಗಳಿಗಿನ್ನು ಅಪಥ್ಯವು
ಇಂತಹ ರೋಗಕೆ ಮದ್ದು ಯಾವುದು?
ತಿಳಿಯಬೇಕು ಇಂದು ನಾವು

ಕರ್ನಾಟಕಕೆ ಗೋಡೆಗಳಿಲ್ಲ
ಇರುವುದು ಕೂಡ ಬೇಡ
ಇರುವ ಗೋಡೆಗಳೆ ಬಿದ್ದರೆ ಸಾಕು
ಹೊಸ ಗೋಡೆಗಳು ಬೇಡ
ಇಂತಹ ಬಯಲಲಿ ಮೇಯುತ್ತಲಿವೆ
ಮೇಯಲಿ, ಅವಕಿವೆ ಹೊಟ್ಟೆ
ಆದರೆ ತಲೆಗೆ ಮಿದುಳು ಬೇಡವೆ?
ಬೇಡವೆ ಕನ್ನಡ ಅವಕೆ!

ಕರ್ನಾಟಕದಲೆ ಹುಟ್ಟಿ ಬೆಳೆದಿವೆ
ಇಲ್ಲಿಯ ಅನೇಕ ರಾಸುಗಳು
ಗಾಳಿಯಷ್ಟೆ ಕನ್ನಡವನು ಉಂಡಿವೆ
ಇವುಗಳ ಶ್ವಾಸ ಕೋಶಗಳು
ಆದರೂ ಏಕೊ ಕನ್ನಡ ಎಂಬುದು
ಇವುಗಳಿಗೂ ಸಹ ಅಪರಿಚಿತ
ಇವುಗಳ ರೋಗಕ್ಕಿನ್ನೊಂದು ಮದ್ದು
ನೀಡಬೇಕಿದೆ ಉಚಿತ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಹರಿ
Next post ಸೊಲ್ಲಾಪುರದ ಸಿದ್ಧರಾಮೇಶ್ವರ ಸ್ತೋತ್ರ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys